18th June 2025
ಚಡಚಣ;ಲೋಕೋಪಯೋಗಿ ಇಲಾಖೆ ಉಪ-ವಿಭಾಗ ಇಂಡಿ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ,
ಚಡಚಣ ಹಾವಿನಾಳ ಹತ್ತಳ್ಳಿ ಲೋಣಿ ಬಿ.ಕೆ ಯಿಂದ ರಾಜ್ಯ ಹೆದ್ದಾರಿ ೪೧ಕ್ಕೆ ಕೂಡುವ ರಸ್ತೆ ಕಿ,ಮೀ ೨.೦೦ ರಿಂದ ೩.೦೦ ವರೆಗೆ ರಸ್ತೆ ಸುಧಾರಣೆಯ ಗುದ್ದಲಿ ಪೂಜೆಯನ್ನು ಶಾಸಕ ವಿಠ್ಠಲ ಕಟಕಧೋಂಡ ಅವರು ಮಂಗಳವಾರ ನೆರವೇರಿಸಿದರು.
ಹಾವಿನಾಳ ಹತ್ತಳ್ಳಿ ಲೋಣಿ, ಬಿಕೆ ಯಿಂದ ರಾಜ್ಯ ಹೆದ್ದಾರಿ೪೧ಕ್ಕೆ ಕೂಡುವ ರಸ್ತೆ ಒಟ್ಟು ೩೩.೦೦ ಕೀ.ಮಿ ಉದ್ದದ ಜಿಲ್ಲಾ ಮುಖ್ಯ ರಸ್ತೆ ಇದ್ದು ಪೂರ್ತಿ ಡಾಂಬರ ಮೇಲೆ ಹೊಂದಿದ ರಸ್ತೆಯಾಗಿರುತ್ತದೆ. ಸದರಿ ರಸ್ತೆಗಳು ಇಂಡಿ ಉಪ-ವಿಭಾಗದ ವ್ಯಾಪ್ತಿಯಲ್ಲಿ ಬರುತ್ತದೆ. ಹಾಗೂ ಸದರಿ ರಸ್ತೆಯು ಚಡಚಣ ಉಮರಾಣಿ ಯಿಂದ ಮಹಾರಾಷ್ಟ್ರ ಕೂಡುವ ರಸ್ತೆ ಇದ್ದು ಮತ್ತು ಗಡಿಯಲ್ಲಿ ಇರುವ ಎರಡು ರಾಜ್ಯದ ಜನರಿಗೆ ಓಡಾಡಲು ತುಂಬಾ ಅನುಕೂಲವಾಗಿರುತ್ತದೆ. ಸದರ ರಸ್ತೆಯ ಮೇಲೆ ವಾಹನ ಸಂಚಾರ ಹೆಚ್ಚಾಗಿ ಇರುವದರಿಂದ ಡಾಂಬರ ಹಾಳಾಗಿದ್ದು, ರಸ್ತೆ ಸಂಚಾರಕ್ಕೆ ತುಂಬಾ ತೊಂದರೆ ಆಗುತ್ತಿದೆ.
ಸದರಿ ರಸ್ತೆ ಸುಧಾರಣೆಗಾಗಿ ಲೆಕ್ಕ ಶಿರ್ಷಿಕ ೨೦೨೩-೨೪ನೇ ಸಾಲಿನ ೫೦೫೪- ಜಿ.ಮು.ರ ಅಪೆಂಡಿಕ್ಷ ಯೋಜನೆಯಡಿಯಲ್ಲಿ ರೂ. ೧೦೦.೦೦ ಲಕ್ಷಗಳಿಗೆ ಅನುದಾನ ಮಂಜುರಾಗಿದ್ದು, ಸದರಿ ರಸ್ತೆ ಕಿ.ಮೀ: ೨.೦೦ ರಿಂದ ೨.೯೮ ವರೆಗೆ ೫.೫೦ ಮೀ ಅಗಲದ ರಸ್ತೆಯನ್ನು ಕ್ರಸ್ಟ್ ಸುಧಾರಣೆ ಮಾಡುವದು ಅತಿ ಅವಶ್ಯವಿದ್ದುದರಿಂದ ಕೆಲಸ ಪ್ರಾರಂಭಿಸಲಾಗಿದೆ ಎಂದರು.
ಈ ಕೆಲಸದ ವಿವರ ಅಂದಾಜು ಮೊತ್ತ ರೂ ೧೦೦ ಲಕ್ಷ ಮಾಡಿದ್ದರು. ಟೆಂಡರಿಗಿಟ್ಟ ಮೊತ್ತ ರೂ ೯೫.೨೨ ಲಕ್ಷ ಆದರೆ ಗುತ್ತಿಗೆದಾರವಿಜಯಪುರದ ಕೆ.ಆರ್.ತುಪ್ಪದ ಅವರಿಗೆ ರೂ ೯೫.೫೧ ಲಕ್ಷ ಗುತ್ತಿಗೆ ಮೊತ್ತ.ನೀಡಿದ್ದು ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಈ ಸಂದರ್ಬದಲ್ಲಿ ಶಾಸಕರು ಹೇಳಿದರು.
ಸರಕಾರದ ಹಂತದಲ್ಲಿ ಕೆಲಸಕ್ಕೆ ಹಣ ಹಾಗೂ ಅನುಮೋದನೆ ಕೊಡಿಸುವ ಕೆಲಸ ನಮ್ಮದು ಆದರೇ ಕೆಲಸ ಸರಿಯಾಗಿದೆಯೊ ಇಲ್ಲವೋ ನೋಡುವದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಬಿಟ್ಟಿದ್ದು ಮತ್ತು ಅವರ ಜವಾಬ್ದಾರಿಯಾಗಿದೆ ಎಂದರು.
ಈ ಸಂಧರ್ಬದಲ್ಲಿ ಕಾರ್ಯಕರ್ತರು ಹಾಗೂ ಹಾವಿನಾಳ ಹತ್ತಳ್ಳಿ ಲೋಣಿ, ಬಿಕೆ ಗ್ರಾಮಸ್ಥರು ಇದ್ದರು.
undefined
ಶ್ರೀಮತಿ ತಂಗವ್ವ ನಂದಪ್ಪ ಬಾಗೇವಾಡಿ ಇವರ ಶತಮಾನೋತ್ಸವದ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಸಮಾರಂಭ
ಬೈಲಹೊಂಗಲದಲ್ಲಿ ಮಲಪ್ರಭಾ ಹಾಸ್ಪಿಟಲ್ ಉದ್ಘಾಟನೆ ನೂತನ ಆಸ್ಪತ್ರೆಯಿಂದ ಜನರ ಆರೋಗ್ಯ ಸಮಸ್ಯೆ ದೂರವಾಗಲಿ - ಡಾ.ಶಿವಾನಂದ ಭಾರತಿ ಸ್ವಾಮಿಜಿ
ಕನ್ನಡದ ಹೆಸರಾಂತ ಕಲಾವಿದ ರಂಗಕರ್ಮಿ ಕನ್ನಡಪರ ಹೋರಾಟಗಾರ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ ವಿ ನಾಗರಾಜ ಮೂರ್ತಿ ಹಾಗೂ ಪ್ರಿಯಾಂಕ ಮಾಸಪತ್ರಿಕೆ ಎಕ್ಸಿಕ್ಯೂಟಿವ್ ಸಂಪಾದಕಿ ಎಸ್. ಜಿ. ತುಂಗಾ ರೇಣುಕಾ ದಂಪತಿಗಳಿಂದ ಮುಂಜಾನೆ ಬೆಳಕು